Slide
Slide
Slide
previous arrow
next arrow

ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಾಗಿ ದುಡಿಯಿರಿ: ನಿವೇದಿತ್ ಆಳ್ವಾ

300x250 AD

ಗೋಕರ್ಣ: ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿರುವುದರಿಂದ ಪ್ರತಿಯೊಬ್ಬರು ಪಕ್ಷಕ್ಕಾಗಿಯೇ ದುಡಿಯಬೇಕು. ಚುನಾವಣೆಯಲ್ಲಿ ಅಭ್ಯರ್ಥಿಗಳು ಯಾರೇ ಆಗಲಿ ಆದರೆ ಅವರ ಗೆಲುವಿಗೆ ಇಡೀ ಪಕ್ಷ ದುಡಿಯಬೇಕು. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಪರಿಶ್ರಮ ಅತ್ಯಂತ ಮುಖ್ಯವಾದುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಹೇಳಿದರು.

ಇಲ್ಲಿಯ ಶ್ರೀಶಂಕರಮಠದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗೋಕರ್ಣ ಕಾಂಗ್ರೆಸ್ ಘಟಕದ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಕೇಂದ್ರದಲ್ಲಿಯೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

300x250 AD

ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕಮೀಟಿಯ ವಿ.ಎಲ್.ನಾಯ್ಕ, ನಾಗರಾಜ ಹಿತ್ತಲಮಕ್ಕಿ, ಜಗದೀಶ ನಾಯಕ, ಪ್ರದೀಪ ನಾಯಕ, ಶಾಂತಾರಾಮ ನಾಯ್ಕ, ಮುಜಾಫರ್ ಶೇಖ್, ಕೃಷ್ಣಾನಂದ ವೇರ್ಣೆಕರ್, ಪ್ರಾಂಕಿ ಫರ್ನಾಂಡೀಸ್, ಸಚಿನ ನಾಯ್ಕ, ಅರುಣ ಗೌಡ, ಹನೀಪ್ ಸಾಬ್, ಮಹಾಬಲೇಶ್ವರ ಗೌಡ, ತೇಜಸ್ವಿ ನಾಯ್ಕ, ಸುಮಿತ್ರಾ ಗೌಡ, ಅರುಣ ಗೌಡ, ವಿಜಯ ಹೊಸಕಟ್ಟಾ ಸೇರಿದಂತೆ ಇತರರಿದ್ದರು.

Share This
300x250 AD
300x250 AD
300x250 AD
Back to top